Friday, October 12, 2012

ಈ ದಿನಾಂತ ಸಮಯದಲಿ

Haadu - Ee dinantha samayadali, upavana ekantadali
Rachane - Nissar Ahmed
Haadirivavaru - Indu Vishwanath, Narasimha Nayak

http://mio.to/9MR7
 
 
ಈ ದಿನಾಂತ ಸಮಯದಲಿ
ಉಪವನ ಏಕಾಂತದಲಿ
ಗೋಧೂಳಿ ಹೊನ್ನಿನಲಿ
ಬರದೆ ಹೋದೆ ನೀನು, ಮರೆತು ಹೋದೆ ನೀನು.

...
ನಾ ಬಿಸುಸುಯ್ಯುವ ಹಂಬಲವೋ
ಶುಭ ಸಮ್ಮಿಲನದ ಕಾತರವೋ
ಬಾ ಇನಿಯ ಕರೆವೆ ನೊಂದು
ಬರದೆ ಹೋದೆ ನೀನು, ಮರೆತು ಹೋದೆ ನೀನು.

ತನುಮನದಲಿ ನೀನೆ ನೆಲಸಿ
ಕಣಕಣವೂ ನಿನ್ನ ಕನಸಿ
ಕಣ್ಣು ಹನಿದು ಕರೆವೆ ನಿನ್ನ
ಬರದೆ ಹೋದೆ ನೀನು, ಮರೆತು ಹೋದೆ ನೀನು.

ಇಳೆಗಿಳಿದಿದೆ ಇರುಳ ನೆರಳು
ದನಿ ಕಳೆದಿದೆ ಹಕ್ಕಿಗೊರಳು
ಶಶಿ ಮೆರೆಸಿದೆ ತೋರುಬೆರಳು
ಬರದೆ ಹೋದೆ ನೀನು, ಮರೆತು ಹೋದೆ ನೀನು.

ಹಗಲಿರುಳಿನ ಈ ನಿರೀಕ್ಷೆ
ಈ ಯಾಚನೆ ಪ್ರಣಯ ಭಿಕ್ಷೆ
ಮೊರೆಯಾಲಿಸಿ ಕಳೆಯೆ ಶಿಕ್ಷೆ
ಬರದೆ ಹೋದೆ ನೀನು, ಮರೆತು ಹೋದೆ ನೀನು