Presenting two songs today - "ಬೆಣ್ಣೆ ಕದ್ದ ನಮ್ಮ ಕೃಷ್ಣ" by K S Nissar Ahmed and "ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ" by H S Venkatesha Murthy. Even though the songs are written by two different poets, it sounds as if H S Venkatesha Murthy wrote "ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ" in Krishna's defense, in response to the Gopi's accusation on Krishna in "ಬೆಣ್ಣೆ ಕದ್ದ ನಮ್ಮ ಕೃಷ್ಣ".
ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ
ಸಾಹಿತ್ಯ - H S Venkatesha Murthy
ರಾಗ ಸಂಯೋಜನೆ - Mysore Ananthaswamy
ಹಾಡಿರುವವರು - M D Pallavi
ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ ಎಲ್ಲಾ ಸೇರಿ ನನ್ನ ಬಾಯಿಗೆ ಬೆಣ್ಣೆಯ ಮೆತ್ತಿದರಮ್ಮ
ನೀನೆ ನೋಡು ಬೆಣ್ಣೆಗಡಿಗೆ ಸೂರಿನ ನೆಲುವಲ್ಲಿ ಹೇಗೆ ತಾನೇ ತೆಗೆಯಲಿ ಅಮ್ಮ ನನ್ನ ಪುಟ್ಟ ಕೈಗಳಲ್ಲಿ
ಶಾಮ ಹೇಳಿದ ಬೆಣ್ಣೆ ಮೆತ್ತಿದ ತನ್ನ ಬಾಯಿ ಒರೆಸುತ್ತಾ ಬೆಣ್ಣೆ ಒರೆಸಿದ ಕೈಯ ಬೆನ್ನ ಹಿಂದೆ ಮರೆಸುತ್ತಾ
Presenting two songs today - "ಬೆಣ್ಣೆ ಕದ್ದ ನಮ್ಮ ಕೃಷ್ಣ" by K S Nissar Ahmed and "ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ" by H S Venkatesha Murthy. Even though the songs are written by two different poets, it sounds as if H S Venkatesha Murthy wrote "ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ" in Krishna's defense, in response to the Gopi's accusation on Krishna in "ಬೆಣ್ಣೆ ಕದ್ದ ನಮ್ಮ ಕೃಷ್ಣ".
"ಮೈಸೂರು ದಸರ ಎಷ್ಟೊಂದು ಸುಂದರ" from the movie "ಕರುಳಿನ ಕರೆ".
ಹಾಡಿರುವವರು Dr. P B Sreenivas.
Not really a bhaavageete, but dasara always brings fond memories of the festivities and celebrations in Mysore.
Although the context and the meaning of the song is much darker and deeper in the movie "ಎಲ್ಲಿಂದಲೊ ಬಂದವರು", in a literal sense, the song can very well be thought to describe the vibrant fall colors.
I had always thought that ’ಕಾಡು ಕುದುರೆ ಓಡಿ ಬಂದಿತ್ತ’ is a folk song. Turns out it is a song written by Chandrashekara Kambara for the movie 'Kaadu Kudure'. The song is sung by Shimoga Subbanna & Kalpana Shirur.
ಕಾಡು ಕುದುರೆ ಓಡಿ ಬಂದಿತ್ತಾ… ಕಾಡು ಕುದುರೆ ಓಡಿ ಬಂದಿತ್ತಾ ಊರಿನಾಚೆ ದೂರದಾರಿ ಸುರುವಾಗೊ ಜಾಗದಲ್ಲಿ ಮೂಡಬೆಟ್ಟ ಸೂರ್ಯ ಹುಟ್ಟಿ ಹೆಸರಿನ ಗುಟ್ಟ ಒಡೆವಲ್ಲಿ ಮುಗಿವೇ ಇಲ್ಲದ ಮುಗಿಲಿನಿಂದ ಜಾರಿಬಿದ್ದ ಉಲ್ಕೀ ಹಾಂಗ ಕಾಡಿನಿಂದ ಚಂಗನೆ ನೆಗೆದಿತ್ತ
ಆಸೆ ಬೂದಿ ತಳದಲ್ಲು ಕೆರಳುತಿವೆ ಕಿಡಿಗಳೆನಿತೊ ಮರಳಿ ಮುರಿದು ಬಿದ್ದ ಮನ ಮರದ ಕೊರಡೊಳು ಹೂವು ಹೂವು ಅರಳಿ ಕೂಡಲಾರದೆದೆಯಾಳದಲ್ಲು ಕಂಡೀತು ಏಕ ಸೂತ್ರ ಕಂಡುದುಂಟು ಬೆಸೆ ಬೆಸೆಗಳಲ್ಲು ಭಿನ್ನತೆಯ ವಿಕಟ ಹಾಸ್ಯ
ಇದನರಿತೆನೆಂದೆಯಾ? ಅರಿವು ಕಿರಣವನೇ ನುಂಗಿತೊಂದು ಮೇಘ ಅ ಮುಗಿಲ ಬಸಿರನೆ ಬಗೆದು ಬಂತು ನವ ಕಿರಣ ಒಂದಮೋಘ ಹಿಡಿದ ಹೊನ್ನೇ ಮಣ್ಣಹುದು ಮಣ್ಣೊಳು ಹೊಳೆದುದುಂಟು ಹೊನ್ನು ಇದು ಹೀಗೆ ಎಂಬ ನಂಬುಗೆಯ ಊರುಗೋಲಿಲ್ಲ ಇನ್ನು ಮುನ್ನು
ಆಸೆ ಎಂಬ ತಳವೊಡೆದ ದೋಣಿಯಲಿ ದೂರ ತೀರ ಯಾನ ಯಾರ ಲೀಲೆಗೋ ಯಾರೋ ಏನೋ ಗುರಿ ಇರದೆ ಬಿಟ್ಟ ಬಾಣ ಇದು ಬಾಳು ನೋಡು ಇದು ತಿಳಿದೆನೆಂದರೂ ತಿಳಿದ ಧೀರನಿಲ್ಲ ಹಲವುತನದ ಮೈ ಮರೆಸುವಾಟವಿದು ನಿಜವು ತೋರದಲ್ಲ
ಬೆಂಗಾಡು ನೋಡು ಇದು ಕಾಂಬ ಬಯಲು ದೊರಕಿಲ್ಲ ಆದಿ ಅಂತ್ಯ ಅದ ತಿಳಿದೆನೆಂದ ಹಲರುಂಟು ತಣಿದೆ-ನೆಂದವರ ಕಾಣೆನಯ್ಯ ಅರೆ ಬೆಳಕಿನಲ್ಲಿ ಬಾಳಲ್ಲಿ ಸುತ್ತಿ ನಾವೆಶ್ಟೋ ಮರೆತು ಮೆರೆದು ಕೊನೆಗೆ ಕರಗುವೆವು ಮರಣ ತೀರ ಘನ ತಿಮಿರದಲ್ಲಿ ಬೆರೆತು
'Baaro Sadhanakerige' - another popular poem by Da Ra Bendre. SadhanaKeri is a little pond in Dharwad which is the inspiration for this poem. It is very well sung by M D Pallavi.
Ganeshana habba without the song "Gajamukhane Ganapathiye" is like celebrating Ugadi habba without listening to "yuga yugadi kaledaroo". If you haven't listened to this yet today, here it is.....
Song - Gajamukhane Ganapathiye Lyrics - Vijayanarasimha Music - M Ranga Rao ...
ಕರೆದಾಗ ತೌರು ಮನೆ, ನೆನೆದಾಗ ನನ್ನ ಮನೆ ಹಳ್ಳಿಯೆರಡರ ಮುದ್ದು ಬಳ್ಳಿ ಅವಳು ಮುಚ್ಚು ಮರೆ ಇಲ್ಲದೆ ಅಚ್ಚ ಮಲ್ಲಿಗೆಯಂತೆ ಅರಳುತಿಹುದು ಅವಳ ಬದುಕು ಬಂಗಾರದೊಡವೆಗಳ ಬಯಸಿಲ್ಲ ಮನಸಿನಲಿ ಬಂಗಾರದಂತ ಹುಡುಗಿ ನನ್ನೊಡವೆ, ನನ್ನ ಬೆಡಗಿ.
ಹಸಿರು ಸೀರೆಯನುಟ್ಟು, ಕೆಂಪು ಬಳೆಗಳ ತೊಟ್ಟು ತುಂಬು ದನಿಯಲಿ ಕರೆವಳೆನ್ನ ಚೆಲುವೆ ಹಣೆಯನಾಳುವುದು ಅವಳ ಕುಂಕುಮದ ನಿಡುವಟ್ಟು ಲಕ್ಷ್ಮಿ ಅವಳೆನ್ನ ಮನೆಗೆ ನಮಗಿದುವೇ ಸೊಗಸು ಬದುಕಿನ ಬಣ್ಣಗಳಾ ಸಂತೆ ನಮಗಿಲ್ಲ ನೂರು ಚಿಂತೆ,ನಾವು ಗಂಧರ್ವರಂತೆ ನಾವು ಗಂಧರ್ವರಂತೆ.